Skip to content
Home » ಕನ್ನಡ » ಸುದ್ದಿ-ಸಮಾಚಾರ » ಸನ್ಯಾಸತ್ವ ಸ್ವೀಕಾರ: ಜೈನರ ಮೆರವಣಿಗೆ

ಸನ್ಯಾಸತ್ವ ಸ್ವೀಕಾರ: ಜೈನರ ಮೆರವಣಿಗೆ

    ಇಲ್ಲಿನ ಭೂತನಗುಡಿಯ ರಿಶಭ್ ಕುಮಾರ್ ಜೈನ್ ಸನ್ಯಾಸ ಸ್ವೀಕಾರಕ್ಕೆ ತೆರಳುವ ಹಿನ್ನೆಲೆಯಲ್ಲಿ ಮಂಗಳವಾರ ಜೈನ ಸಮಾಜದಿಂದ ವಿದಾಯ ಸಮಾರಂಭ ಏರ್ಪಡಿಸಲಾಗಿತ್ತು.

    ಭದ್ರಾವತಿ: ಇಲ್ಲಿನ ಭೂತನಗುಡಿಯ ರಿಶಭ್ ಕುಮಾರ್ ಜೈನ್ ಸನ್ಯಾಸ ಸ್ವೀಕಾರಕ್ಕೆ ತೆರಳುವ ಹಿನ್ನೆಲೆಯಲ್ಲಿ ಮಂಗಳವಾರ ಜೈನ ಸಮಾಜದಿಂದ ವಿದಾಯ ಸಮಾರಂಭ ಏರ್ಪಡಿಸಲಾಗಿತ್ತು.

    ದಿನೇಶ ಕುಮಾರ್ ಮತ್ತು ರಾಜುಲ್ ದಂಪತಿ ಪುತ್ರರಾದ ರಿಶಭ್ ಅವರನ್ನು ಅವರ ನಿವಾಸದಿಂದ ಅಲಂಕೃತ ವಾಹನದಲ್ಲಿ ಕೂರಿಸಿ, ಹೂಮಾಲೆ, ಪುಷ್ಪಗಳಿಂದ ಅಲಂಕರಿಸಿ, ವಾದ್ಯಮೇಳದ ಜತೆಗೆ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.

    ಮೆರವಣಿಗೆ ವೇಳೆ ಸಮಾಜದ ಬಂಧುಗಳು ರಿಶಭ್ ಹಾಗೂ ಅವರ ಕುಟುಂಬದವರಿಗೆ ಪುಷ್ಪಮಾಲೆಯ ಗೌರವ ಸಮರ್ಪಣೆ ಮಾಡುತ್ತಿದ್ದ ದೃಶ್ಯ ಒಂದೆಡೆ ಕಂಡು ಬಂದರೆ, ಮತ್ತೊಂದೆಡೆ, ರಸ್ತೆಯ ಎರಡು ಬದಿಯಲ್ಲಿ ಲಡ್ಡು ವಿತರಣೆ ನಡೆಯಿತು.

    ಹಳೇನಗರ ಜೈನ ಮಂದಿರಕ್ಕೆ ತೆರಳಿದ ಮೆರವಣಿಗೆಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನ ಮೂಲಕ ಗೌರವ ಸಮರ್ಪಣೆ ಮಾಡುವ ಮೂಲಕ ವಿದಾಯದ ಶುಭ ಸಂದೇಶವನ್ನು ನೀಡಲಾಯಿತು. ನಗರದ ಜೈನ ಸಮಾಜದ ಮುಖಂಡರು ಸೇರಿದಂತೆ ವಿವಿಧ ಸಮುದಾಯ ಮುಖಂಡರು, ನಾಗರಿಕರು, ಚುನಾಯಿತ ಪ್ರತಿನಿಧಿಗಳು ರಿಶಭ್ ಅವರಿಗೆ ಗೌರವ ಸಮರ್ಪಿಸಿದರು. – ಕೃಪೆ: ಪ್ರಜಾವಾಣಿ

    error: Jain Heritage Centres - Celebrating Jain Heritage.....Globally!