Skip to content
Home » ಕನ್ನಡ » ಸುದ್ದಿ-ಸಮಾಚಾರ » ಶ್ರವಣಬೆಳಗೊಳ ವೈಭವ ಸಾರುವ ಸಾಕ್ಷ್ಯ ಚಿತ್ರ

ಶ್ರವಣಬೆಳಗೊಳ ವೈಭವ ಸಾರುವ ಸಾಕ್ಷ್ಯ ಚಿತ್ರ

    ಶ್ರವಣಬೆಳಗೊಳ ವೈಭವ ಸಾಕ್ಷ್ಯಚಿತ್ರದಲ್ಲಿ ಸೆರೆ

    ಚನ್ನರಾಯಪಟ್ಟಣ (ಹಾಸನ ಜಿಲ್ಲೆ), ಫೆಬ್ರವರಿ, ೧೦, ೨೦೧೭: ಶ್ರೀ ಕ್ಷೇತ್ರ ಶ್ರವಣಬೆಳಗೊಳಕ್ಕೆ ಆಗಮಿಸುವ ಪ್ರವಾಸಿಗರಿಗೆ ಕ್ಷೇತ್ರದ ಪ್ರಮುಖ ಆಕರ್ಷಣೆಯಾದ ವಿಂಧ್ಯಗಿರಿ ಮತ್ತು ಚಂದ್ರಗಿರಿಯ ಇತಿಹಾಸವನ್ನು ಕುಳಿತಲ್ಲೇ ತಿಳಿದುಕೊಳ್ಳುವ ವ್ಯವಸ್ಥೆಯನ್ನು ಕೇಂದ್ರ ಪುರಾತತ್ವ ಸರ್ವೇಕ್ಷ ಣಾ ಇಲಾಖೆ ಮಾಡಿದೆ.

    ವಿಂಧ್ಯಗಿರಿಯ ಬುಡದಲ್ಲೇ ಇರುವ ಪ್ರವಾಸೋದ್ಯಮ ಇಲಾಖೆಯ ಕಚೇರಿಯ ಪಕ್ಕದಲ್ಲೇ ಇದ್ದ ಶ್ರೀಮಠದ ಕಚೇರಿಯನ್ನು ಇದಕ್ಕಾಗಿ ತೆರವುಗೊಳಿಸಿ ಸಾಕ್ಷ ್ಯಚಿತ್ರ ವೀಕ್ಷಿಸುವ ಅವಕಾಶ ಮಾಡಿಕೊಡಲಾಗಿದೆ. ಪ್ರೊಜೆಕ್ಟರ್‌ ಮೂಲಕ ಸ್ಕ್ರೀನ್‌ ಮೇಲೆ ನೋಡಬಹುದಾಗಿದ್ದು, ತಲಾ 15 ನಿಮಿಷಗಳ ಕಾಲ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಇದನ್ನು ತಯಾರು ಮಾಡಲಾಗಿದೆ. ನೂತನವಾಗಿ ವ್ಯವಸ್ಥೆಗೊಳಿಸಿರುವ ಆಧುನಿಕ ಉಪಕರಣಗಳನ್ನು ಇಲ್ಲಿ ಅಳವಡಿಸಲಾಗಿದ್ದು, ಅಖಿಲ ಭಾರತೀಯ ದಿಗಂಬರ ತೀರ್ಥಕ್ಷೇತ್ರ ಸಮಿತಿ ಅಧ್ಯಕ್ಷೆ ಸರಿತಾ ಜೈನ್‌ ಗುರುವಾರ ಚಾಲನೆ ನೀಡಿದರು. ಇದೇ ವೇಳೆ ಹಾಜರಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೂ ಎಲ್ಲರೊಂದಿಗೆ ಕುಳಿತು ವೀಕ್ಷಿಸಿದರು.

    ವಿಂಧ್ಯಗಿರಿಯಲ್ಲಿರುವ ಭಗವಾನ್‌ ಬಾಹುಬಲಿ ಹಾಗೂ ಅದರ ಸುತ್ತಮುತ್ತಲೂ ಇರುವ ಕೆತ್ತನೆಗಳು, ಚಿಕ್ಕಬೆಟ್ಟದ ಅತ್ಯಾಕರ್ಷಕ ಬಸದಿಗಳು ಹಸ್ತಾಕ್ಷ ರಗಳು, ಮಹಾನವಮಿ ಮಂಟಪ, ನಿಷಿಧಿ ಮಂಟಪ, ಕೂಗೆಬ್ರಹ್ಮದೇವರ ಸ್ತಂಭ ಮುಂತಾದ ಸ್ಮಾರಕಗಳನ್ನು ಚಿತ್ರದಲ್ಲಿ ಅಳವಡಿಸಲಾಗಿದೆ. ಜಿನ್ನನಾಥಪುರದ ಶಾಂತಿನಾಥ ಬಸದಿಯನ್ನೂ ಸಾಕ್ಷ ್ಯಚಿತ್ರ ಒಳಗೊಂಡಿದೆ. ಚಿತ್ರ ವೀಕ್ಷ ಣೆಯಲ್ಲಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಹಾಮಸ್ತಕಾಭಿಷೇಕ ಮಹೋತ್ಸವದ ದೃಶ್ಯಗಳನ್ನೂ ಇದರಲ್ಲಿ ಅಳವಡಿಸಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ವಿಂಧ್ಯಗಿರಿಯ ಅಪೂರ್ವ ಕೆತ್ತನೆಗಳನ್ನು ಇದರಲ್ಲಿ ಅಳವಡಿಸಿಕೊಂಡಿರುವುದಕ್ಕೆ ಪ್ರಶಂಸೆ ವ್ಯಕ್ತವಾಯಿತು. – ಕೃಪೆ: ವಿಜಯಕರ್ನಾಟಕ

    error: Jain Heritage Centres - Celebrating Jain Heritage.....Globally!