Skip to content
Home » ಕನ್ನಡ » ಜಿನ ರತ್ನ ಭೂಷಣರು » ಅಬ್ಬಕ್ಕ ರಾಣಿ ಚೌಟ

ಅಬ್ಬಕ್ಕ ರಾಣಿ ಚೌಟ

    “ಅಬ್ಬಕ್ಕ ರಾಣಿ ಚೌಟ” ಅಥವಾ ‘ತುಳುನಾಡಿನ ರಾಣಿ ಮತ್ತು ಚೌಟ ರಾಜವಂಶಕ್ಕೆ ಸೇರಿದವಳು. ಚೌಟ ರಾಜವಂಶದ ಜನರು ದೇವಾಲಯದ ನಗರ ‘ಮೂಡುಬಿದಿರೆ’ ಮತ್ತು ಬಂದರು ನಗರವಾಗಿದ್ದ ಅದರ ರಾಜಧಾನಿ ‘ಉಳ್ಳಾಲ’ದಿಂದ ಆಳ್ವಿಕೆ ನಡೆಸಿದರು. ಉಳ್ಳಾಲ ಕೋಟೆಯು ಅರಬ್ಬೀ ಸಮುದ್ರದ ತೀರದಲ್ಲಿ ಮಂಗಳೂರು ನಗರದಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿತ್ತು. ಹದಿನಾರನೇ ಶತಮಾನದ ಉತ್ತರಾರ್ಧದಲ್ಲಿ, ಅಬ್ಬಕ್ಕ ಪೋರ್ಚುಗೀಸರೊಂದಿಗೆ ಹೋರಾಡಿದಳು. ಚೌಟ ರಾಜವಂಶವು ಮಾತ್ರ ಪ್ರಧಾನ ರಾಜವಂಶವಾಗಿತ್ತು. ಆದ್ದರಿಂದ ಅಬ್ಬಕ್ಕನ ತಾಯಿಯ ಚಿಕ್ಕಪ್ಪ, ತಿರುಮಲ ರಾಯರು ಅವಳನ್ನು ಉಳ್ಳಾಲದ ರಾಣಿಯನ್ನಾಗಿ ಮಾಡಿದರು. ತಿರುಮಲರಾಯರು ಅಬ್ಬಕ್ಕನಿಗೆ ಯುದ್ಧದ ವಿವಿಧ ತಂತ್ರಗಳನ್ನು ಕಲಿಸಿದರು.
    ಪೋರ್ಚುಗೀಸರು ಉಳ್ಳಾಲ ನಗರವನ್ನು ವಶಪಡಿಸಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡಿದರು. ಅವಳ ಶೌರ್ಯದಿಂದಾಗಿ ಅವಳು ‘ಅಭಯ ರಾಣಿ’ ಎಂದು ಪ್ರಸಿದ್ಧಳಾದಳು. ವಸಾಹತುಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ ಕೆಲವೇ ಭಾರತೀಯರಲ್ಲಿ, ಅವಳು ಒಬ್ಬಳು. ಆಕೆಯನ್ನು ಭಾರತದ ಮೊದಲ ಸ್ವಾತಂತ್ರ ಹೋರಾಟಗಾರ್ತಿ ಎಂದು ಪರಿಗಣಿಸಲಾಗಿದೆ. ರಾಣಿ ಅಬ್ಬಕ್ಕ ಉಳ್ಳಾಲ ಎಂಬ ಸಣ್ಣ ಸಾಮ್ರಾಜ್ಯದ ರಾಣಿಯಾಗಿರಬಹುದು, ಆದರೆ ಅವಳು ಅದಮ್ಯ ಧೈರ್ಯಶಾಲಿ ಮತ್ತು ದೇಶಭಕ್ತಿ, ಮಹಿಳೆಯಾಗಿದ್ದಳು.
    ಅಬ್ಬಕ್ಕ ತುಂಬಾ ಭರವಸೆಯ ಮಗು ಮತ್ತು ಅವಳು ಬೆಳೆದಂತೆ ಆಕೆಯ ತಂದೆ ಯಾವಾಗಲೂ ಅವಳನ್ನು ಪ್ರೋತ್ಸಾಹಿಸುತ್ತಿದ್ದರು, ಅದರ ಪರಿಣಾಮವಾಗಿ ಅವಳು ಎಲ್ಲಾ ಕ್ಷೇತ್ರಗಳಲ್ಲಿ ಪ್ರವೀಣಾದಳು. ಅವಳು ಪಕ್ಕದ ಲಕ್ಷಪ್ಪ ಬಂಗರಸ ರಾಜನನ್ನು ಮದುವೆಯಾಗಿದ್ದಳು. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಪತಿ ಕೊಟ್ಟ ವಜ್ರ, ಒಡವೆಗಳನ್ನು ಹಿಂದಿರುಗಿಸಿ ಅಬ್ಬಕ್ಕ ಮನೆಗೆ ಮರಳಿದಳು.
    ಅಬ್ಬಕ್ಕ ಜೈನಳಾಗಿರಬಹುದು, ಆದರೆ ಅವಳ ಆಳ್ವಿಕೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಉತ್ತಮವಾಗಿ ಪ್ರತಿನಿಧಿಸಲ್ಪಟ್ಟರು. ಅವಳ ಸೈನ್ಯವು ಎಲ್ಲಾ ಜಾತಿ ಮತ್ತು ಪಂಗಡಗಳ ಜನರನ್ನು ಒಳಗೊಂಡಿತ್ತು. ಮೊಗವೀರ ಮೀನುಗಾರರೂ ಸಹ ಅದರಲ್ಲಿದ್ದರು.
    ಪೋರ್ಚುಗೀಸರ ಕಣ್ಣುಗಳು ದಕ್ಷಿಣದ ಕಡೆಗೆ ಮತ್ತು ಸಮುದ್ರದ ತೀರದಲ್ಲಿ ಬಿದ್ದವು. ಅವರು ಮೊದಲು ೧೫೨೫ ರಲ್ಲಿ ದಕ್ಷಿಣ ಕೆನರಾ ದಡದ ಮೇಲೆ ದಾಳಿ ಮಾಡಿದರು ಮತ್ತು ಮಂಗಳೂರು ಬಂದರನ್ನು ನಾಶಪಡಿಸಿದರು. ಉಳ್ಳಾಲವು ಸಮೃದ್ಧ ಬಂದರು ಮತ್ತು ಅರಬ್ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಮಸಾಲೆ, ಪದಾರ್ಥಗಳ ವ್ಯಾಪಾರದ ಲಾಭದಾಯಕ ಕೇಂದ್ರವಾಗಿತ್ತು. ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರು ಪ್ರದೇಶ ಮತ್ತು ವ್ಯಾಪಾರ ಮಾರ್ಗಗಳನ್ನು ನಿಯಂತ್ರಿಸಲು ಪರಸ್ಪರ ಘರ್ಷಣೆ ನಡೆಸಿದರು. ಆದರೆ ಸ್ಥಳೀಯ ಮುಖ್ಯಸ್ಥರ ಪ್ರತಿರೋಧವು ಪ್ರಬಲವಾದ ಕಾರಣ ಅವರು ಆ ಪ್ರದೇಶದೊಳಗೆ ಅಳವಾಗಿ ಭೇದಿಸಲಾಗಲಿಲ್ಲ. ೧೫೨೫ ರಲ್ಲಿ ದಕ್ಷಿಣ ಕೆನರಾ ಕರಾವಳಿಯ ಮೇಲೆ ಮೊದಲ ದಾಳಿ ಮಾಡುವ ಮೂಲಕ ಪೋರ್ಚುಗೀಸರು ಮಂಗಳೂರು ಬಂದರನ್ನು ನಾಶಪಡಿಸಿದರು. ಈ ಘಟನೆಯು ರಾಣಿಯನ್ನು ಎಚ್ಚರಿಸಿತು ಮತ್ತು ತನ್ನ ರಾಜ್ಯದ ಭದ್ರತೆಗಾಗಿ ತಯಾರಿ ಆರಂಭಿಸಿತು. ಎರಡನೆಯ ದಾಳಿಯಲ್ಲಿ ಪೋರ್ಚುಗೀಸರು ಅಬ್ಬಕ್ಕನ ತಂತ್ರದಿAದ ದುರ್ಬಲಗೊಂಡರು, ಆದರೆ ರಾಣಿಯು ತಮ್ಮ ಮುಂದೆ ತಲೆಬಾಗಬೇಕೆಂದು ಅವರು ಬಯಸಿದರು, ಆದರೆ ಅಬ್ಬಕ ತಲೆಬಾಗಲು ಒಪ್ಪಲಿಲ್ಲ. ೧೫೫೫ ರಲ್ಲಿ, ಪೋರ್ಚುಗೀಸರು ಅಡ್ಮಿರಲ್ ಡೋಮ್ ಲ್ವಾರೊ ಡಾ ಸಿಲ್ವೆರಾ ಅವರನ್ನು ರಾಣಿಯ ವಿರುದ್ಧ ಹೋರಾಡಲು ಕಳುಹಿಸಿದರು. ಆ ಯುದ್ಧದಲ್ಲಿ, ರಾಣಿ ಮತ್ತೊಮ್ಮೆ ತನ್ನನ್ನು ರಕ್ಷಿಸಿಕೊಂಡಳು ಮತ್ತು ಆಕ್ರಮಣಕಾರರನ್ನು ಯಶಸ್ವಿಯಾಗಿ ಓಡಿಸಿದಳು.
    ಈ ಮೂಲಕ ಅಬ್ಬಕನ ರಾಜ್ಯ ಉಳ್ಳಾಲದ ಮೇಲೆ ಪೋರ್ಚುಗೀಸರಿಂದ ೬ ಬಾರಿ ದಾಳಿ ಮಾಡಿದರು, ಆದರೆ ಅಬ್ಬಕ್ಕ ಪ್ರತಿ ಬಾರಿಯೂ ತಮ್ಮ ಧೈರ್ಯ ಮತ್ತು ಶೌರ್ಯವನ್ನು ತೋರಿಸುತ್ತಾ ಅವರನ್ನು ತಮ್ಮ ಮಿತಿಯಿಂದ ಹೊರಹಾಕಿದರು. ಈ ಎಲ್ಲಾ ಯುದ್ಧಗಳು ೧೫೨೫ ರಿಂದ ೧೫೭೦ ರವರೆಗೆ ಪದೇ ಪದೇ ನಡೆದವು. ಈ ಯುದ್ಧಗಳಲ್ಲಿ, ಬಹಳಷ್ಟು ನಾಶವಾಯಿತು, ದೇವಾಲಯಗಳು ಸುಟ್ಟು ಹೋದವು, ವೃದ್ಧರು, ಕಿರಿಯರು, ಮಕ್ಕಳು, ಮಹಿಳೆಯರು ಎಲ್ಲರೂ ಚಿತ್ರಹಿಂಸೆಗೊಳಗಾದರು. ೧೫೬೭ ರಲ್ಲಿ, ಪೋರ್ಚುಗೀಸರು ಐದನೇ ಆಕ್ರಮಣವನ್ನು ಮಾಡಿದರು, ಇದರಲ್ಲಿ, ಅವರು ವೈಸರಾಯ್ ಆಂಟೋನಿಯೊ ನೊರನ್ಹನೆ ಜನರಲ್ ಜೂ ಪಿಕೊಟೊ ಅವರೊಂದಿಗೆ ಉಲ್ಲಾಲ್ಗೆ ಸೈನ್ಯದ ಒಂದು ಪಡೆಯನ್ನು ಕಳುಹಿಸಿದರು. ಅಬ್ಬಕ್ಕ ಮಸೀದಿಯಲ್ಲಿ ಆಶ್ರಯ ಪಡೆದಳು. ಅದೇ ರಾತ್ರಿ ೨೦೦ ಸೈನಿಕರನ್ನು ಒಟ್ಟುಗೂಡಿಸಿ ಪೋರ್ಚುಗೀಸರ ಮೇಲೆ ದಾಳಿ ಮಾಡಿದಳು ಈ ಯುದ್ಧದಲ್ಲಿ, ಜನರಲ್ ಪಿಕ್ಸೊಟೊ ಕೊಲ್ಲಲ್ಪಟ್ಟರು ಮತ್ತು ೭೦ ಪೋರ್ಚುಗೀಸ್ ಸೈನಿಕರನ್ನು ಸೆರೆಹಿಡಿಯಲಾಯಿತು, ಅನೇಕ ಸೈನಿಕರು ಓಡಿಹೋದರು. ನಂತರದ ದಾಳಿಗಳಲ್ಲಿ, ರಾಣಿ ಮತ್ತು ಆಕೆಯ ಬೆಂಬಲಿಗರು ಆಡ್ಮಿರಲ್ ಮಸ್ಕರೇನ್ಹಸ್ನನ್ನು ಕೊಂದು ಪೋರ್ಚುಗೀಸರನ್ನು ಮಂಗಳೂರು ಕೋಟೆಯನ್ನು ಖಾಲಿ ಮಾಡುವಂತೆ ಒತ್ತಾಯಿಸಿದರು.
    ಅಬ್ಬಕ್ಕನ ವಿರುದ್ಧ ಸೇಡು ತೀರಿಸಿಕೊಳ್ಳಲು ಪತಿ ಪೋರ್ಚುಗೀಸರೊಂದಿಗೆ ಕೈಜೋಡಿಸಿದ. ಪೋರ್ಚುಗೀಸರು ರಾಣಿಯ ಗಂಡನ ಸಹಾಯದಿಂದ ಉಳ್ಳಾಲದ ಮೇಲೆ ಆಕ್ರಮಣವನ್ನು ಮುಂದುವರೆಸಿದರು. ಘೋರ ಯುದ್ಧದ ನಂತರವೂ ಅಬ್ಬಕ್ಕ ರಾಣಿ ತನ್ನ ನಿರ್ಧಾರದಲ್ಲಿ ದೃಢವಾಗಿದ್ದಳು. ೧೫೭೦ ರಲ್ಲಿ, ಅವರು ಪೋರ್ಚುಗೀಸರ ವಿರುದ್ಧ ಅಹಮದ್‌ನಗರ ಮತ್ತು ಕ್ಯಾಲಿಕಟ್‌ನ ಬಿಜಾಪುರ ಸುಲ್ತಾನರೊಂದಿಗೆ ಮೈತ್ರಿ ಮಾಡಿಕೊಂಡರು. ಜಾಮೋರಿನ್‌ನ ಸರ್ದಾರ್ ಕುಟ್ಟಿ, ಪೋಕರ್ ಮಾರ್ಕರ್ ಅಬ್ಬಕ್ಕನ ಪರವಾಗಿ ಹೋರಾಡಿದನು ಮತ್ತು ಪೋರ್ಚುಗೀಸರು ಮಂಗಳೂರಿನ ಕೋಟೆಯನ್ನು ನಾಶಪಡಿಸಿದರು ಅದರೆ ಹಿಂದಿರುಗುವಾಗ ಅವರು ಪೋರ್ಚುಗೀಸರಿಂದ ಕೊಲ್ಲಲ್ಪಟ್ಟರು. ಗಂಡನ ದ್ರೋಹದಿಂದ ಅಬ್ಬಕ್ಕ ಸೋತಳು, ಸಿಕ್ಕಿಬಿದ್ದು ಜೈಲಿನಲಿಟ್ಟಳು, ಆದರೆ ಜೈಲಿನಲ್ಲಿಯೂ ಬಂಡಾಯವೆದ್ದು ಹೋರಾಡುತ್ತಲೇ ಪ್ರಾಣ ಬಿಟ್ಟರು.
    ಅವರು ಬಹಳ ಜನಪ್ರಿಯ ರಾಣಿಯಾಗಿದ್ದರು, ಅವರು ಇನ್ನೂ ಜಾನಪದ ಸಾಹಿತ್ಯದ ಭಾಗವಾಗಿದ್ದಾರೆ. ಜಾನಪದ ಸಂಗೀತ ಮತ್ತು ಯಕ್ಷಗಾನದ ಮೂಲಕ (ಇದು ತುಳುನಾಡಿನ ಜನಪ್ರಿಯ ರಂಗಭೂಮಿ) ರಾಣಿಯ ಕಥೆಯನ್ನು ಪೀಳಿಗೆಯಿಂದ ಪೀಳಿಗೆಗೆ ಪುನರಾವರ್ತಿಸಲಾಗುತ್ತದೆ, ಭೂತ ಕೋಲವು ಸ್ಥಳೀಯ ನೃತ್ಯ ಪ್ರಕಾರವಾಗಿದ್ದು, ಇದರಲ್ಲಿ ಅಬ್ಬಕ್ಕ ಮಹಾದೇವಿಯ ಮಹಾನ್ ಸಾಹಸಗಳನ್ನು ತೋರಿಸಲಾಗಿದೆ. ಅಬ್ಬಕ್ಕ ಕಪ್ಪು ಮೈಬಣ್ಣ, ನೋಟದಲ್ಲಿ ತುಂಬಾ ಸುಂದರವಾಗಿದ್ದಳು. ಅವಳು ಯಾವಾಗಲೂ ಸಾಮಾನ್ಯ ವ್ಯಕ್ತಿಯಂತೆ ಬಟ್ಟೆಗಳನ್ನು ಧರಿಸುತ್ತಿದ್ದಳು. ಅವಳು ತನ್ನ ಪ್ರಜೆಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿದ್ದಳು ಮತ್ತು ನ್ಯಾಯವನ್ನು ಮಾಡಲು ತಡರಾತ್ರಿಯವರೆಗೆ ನಿರತಳಾಗಿದ್ದಳು. ‘ಅಗ್ನಿ ಬಾಣ’ ವನ್ನು ಬಳಸಿದ ಕೊನೆಯ ವ್ಯಕ್ತಿ ಆಕೆ ಎಂದು ಹೇಳಲಾಗುತ್ತದೆ. ಮಾಹಿತಿಯ ಪ್ರಕಾರ, ರಾಣಿಗೆ ಇಬ್ಬರು ಕೆಚ್ಚೆದೆಯ ಹೆಣ್ಣು ಮಕ್ಕಳಿದ್ದರು, ಅವರು ಪೋರ್ಚುಗೀಸರ ವಿರುದ್ಧ ಅವಳೊಂದಿಗೆ ಹೋರಾಡಿದರು..
    ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಪೋರ್ಚುಗೀಸರು ೧೫೨ರಲ್ಲಿ ಗೋವೆಯನ್ನ ತಮ್ಮ ವಶಕ್ಕೆ ತೆಗೆದುಕೊಂಡರು. ನಂತರ ಕೆನರಾ ಕಿನಾರೆಯನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಇಂಡಿಯನ್ ಓಶನ್‌ನಲ್ಲಿ ತಮ್ಮದೇ ಏಕಾಧಿಪತ್ಯ ಸಾಧಿಸಲು ಇವರಿಗೆ ಉಲ್ಲಾಳದ ಅವಶ್ಯಕತೆಯಿತ್ತು. ತಮ್ಮದಲ್ಲದ ನಾಡಿನಲ್ಲಿ ತೆರಿಗೆಯನ್ನೂ ಸಹ ಸಂಗ್ರಹಿಸಲು ಶುರು ಮಾಡಿದ್ದರು. ಇವೆಲ್ಲವೂ ಅಬ್ಬಕ್ಕ ಚೌಟಳಿಗೆ ಸಹ್ಯವಾಗಿರಲಿಲ್ಲ. ಜೈನ ಮಹಾರಾಣಿ ಸೌಹಾರ್ದಯುತವಾಗಿ ಹಿಂದೂ ಮತ್ತು ಮುಸ್ಲಿಮರನ್ನ ಆಳುತಿದ್ದಳು. ಮೊಗವೀರ ಮೀನುಗಾರರು ಅವಳ ಶಕ್ತಿಯಾಗಿದ್ದರು. ಪೋರ್ಚುಗೀಸರ ನೌಕಾಪಡೆಯನ್ನು ಎದುರಿಸಲು ಮೊಗವೀರರು ಸಮರ್ಥರಾಗಿದ್ದರು.
    ಇದಕ್ಕಿಂತ ಮಿಗಿಲಾಗಿ ರಾಣಿ ಅಬ್ಬಕ್ಕಳೇ ಕತ್ತಿ ಹಿಡಿದು, ಕುದುರೆಯನ್ನೇರಿ ರಣಾಂಗಣದಲ್ಲಿ ಹೊಡೆದಾಡುತ್ತಿದ್ದಳು. ೧೫೫೬ರಲ್ಲಿ ಅಡ್ಮಿರಲ್ ಸೆವ್ವೆರಾ ಮುಂದಾಳತ್ವದಲ್ಲಿ ದೊಡ್ಡ ನೌಕಾಪಡೆಯನ್ನ ಕಳಿಸಿದ್ದರು. ಪೋರ್ಚುಗೀಸರು. ಅಲ್ಲೂ ಅವರಿಗೆ ಮುಖಭಂಗವಾಗಿ ಹಿಂದಿರುಗಿದರು. ಅಬ್ಬಕ್ಕನ ಸೇನೆ ನೌಕಾಪಡೆಯಲ್ಲಿ ಎಲ್ಲಾ ಜಾತಿ, ಧರ್ಮದವರೂ ಇದ್ದರು. ಅರಬ್ಬರ ಜೊತೆ ಇದ್ದ ವ್ಯಾಪಾರ ಸಂಬAಧ ದುಡ್ಡು ಕಾಸಿಗೆ ಯಾವ ಕೊರತೆಯೂ ಆಗಿರಲ್ಲಿಲ್ಲ. ಅರಬ್ಬರ ಜೊತೆ ವ್ಯಾಪಾರಕ್ಕೆ ತೊಡಗಿದ್ದರಿಂದಲೇ ಈ ಸವ್ವೆರಾಗೆÀ ಕೋಪ ಬಂದಿದ್ದು. ೨೦ ವರ್ಷದಲ್ಲಿ ಸುಮಾರು ದಾಳಿಗಳಾದವು. ಕಾಲಿಕೆಟ್ ನ ಝಾಮೋರಿನ್, ತುಳುನಾಡಿನ ಸುಮಾರು ರಾಜ್ಯದವರ ಹತ್ತಿರ ಮೈತ್ರಿ ಮಾಡಿಕೊಂಡು ಈಕೆ ಹೊಡೆದಾಡುತ್ತಿದ್ದಳು. ಒಂದು ಪ್ರಾಂತ್ಯದ ಜನರು ಈ ಪರಂಗಿಯವರ ದಬ್ಬಾಳಿಕೆಯಲ್ಲಿ ನಲುಗಿ ಹೋಗಿದ್ದರು ಎಂಬುದು ಇಲ್ಲಿ ಬಹು ಸತ್ಯವಾಗಿ ಗೋಚರಿಸುತ್ತಿತ್ತು.
    ಮತ್ತೆ ಜೆನರಲ್ ಪೆಕ್ಸಿಟೋ ಎಂಬ ದುರುಳ ಬಂದು ಉಲ್ಲಾಳವನ್ನ ವಶಪಡಿಸಿಕೊಂಡ. ಅಬ್ಬಕ್ಕ ಒಂದು ಮಸೀದಿಯಲ್ಲಿ ಅವಿತು ತನ್ನ ಪ್ರಾಣವನ್ನು ಉಳಿಸಿಕೊಂಡಳು. ಆಗ ಆದ ಅವಮಾನವನ್ನು ಸಹಿಸದ ಅಬ್ಬಕ್ಕ ತನ್ನ ಸೇನೆಯಲ್ಲಿದ್ದ ಇನ್ನೂರು ವೀರಾಧಿವೀರರನ್ನ ಉಲ್ಲಾಳದ ಕೋಟೆಯಲ್ಲಿ ನುಗ್ಗಿಸಿ ಜೆನರಲ್ ಪಕ್ಸಿಟೋನ್ನನ್ನು ಕೊಂದಳು.
    ಮತ್ತೆ ಬಿಜಾಪುರದ ಸುಲ್ತಾನರು, ಝಾಮೋರಿನ್ ಸಹಾಯ ತೆಗೆದುಕೊಂಡು ಇಡೀ ಮಂಗಳೂರನ್ನ ತನ್ನ ವಶ ಪಡೆಸಿಕೊಂಡಳು. ಅದಕ್ಕೆ ಅಡ್ಮಿರಲ್ ಮಸ್ಕಾರೆನಸ್ ಹತ್ಯೆಯೂ ಆಯ್ತು. ಇವೆಲ್ಲ ಆಗಿ ನಿಟ್ಟುಸಿರು ಬಿಡುತ್ತಿರುವಾಗ ತನ್ನ ಗಂಡನೇ ವೈರಿಗಳ ಜೊತೆ ಸೇರಿ ಅಬ್ಬಕ್ಕನನ್ನ ಹಿಡಿದುಕೊಟ್ಟ. ಅಲ್ಲೂ ಜೈಲಿನಲ್ಲಿ ಉಪವಾಸ ಇದ್ದು, ಹೋರಾಡಿ ತದ ನಂತರ ಅವಳನ್ನ ಹತ್ಯೆ ಮಾಡಿದರು.
    ಹೆಣ್ಣು ಧೀರೆಯಾಗಬೇಕು, ವೀರೆಯಾಗಬೇಕು, ಅವಳತನ ಅವಳಿಗಿರಬೇಕು, ಗಟ್ಟಿಯಾಗಿ ಅವಳಿಗನ್ನಿಸಿದ್ದನ್ನು ಮಾತಾಡಬೇಕು, ನಡೆದುಕೊಳ್ಳಬೇಕು. ಇದು ೧೫ನೇ ಶತಮಾನದಲ್ಲಿ ನಡೆದ ಕಥೆ. ಭಾರತ ಈಗ ಸ್ವತಂತ್ರವಾಗಿದೆ. ಈಗಲೂ ಹೆಣ್ಣು ಇನ್ನೂ ಮನೆಯಲ್ಲಿ ಮನಸ್ಸಲ್ಲಿ ಭಯ ತುಂಬಿಕೊAಡರೆ ಅಬ್ಬಕ್ಕನಂತಹ ವೀರೆಯರು ತಮ್ಮ ಮನೆ, ಸಂಸಾರ ಎಲ್ಲವನ್ನು ಬಿಟ್ಟು ಪ್ರಾಣವನ್ನೇ ಕೊಟ್ಟು ದೇಶ ಉಳಿಸಿದವರಿಗೆ ನಾವು ಮಾಡುವ ಅವಮಾನ. ಅಬ್ಬಕ್ಕ ನಮ್ಮ ಜೀವನದ ದಾರಿ ದೀಪವಾಗಲಿ, ಅವಳಂತೆ ನಾವೂ ಧೀರರಾಗೋಣ, ಮುನ್ನುಗ್ಗೋಣ. ಅವಳೇ ನಮಗೆ ಆದರ್ಶ.
    ಅಲ್ಲಿಗೆ ಕರಾವಳಿ ಕೇಸರಿಯ ಕಥೆ ಮುಗಿಯಿತು. ಆದರೆ ಜನಮಾನಸದಲ್ಲಿ ಅವಳಿನ್ನೂ ಇದೇ ಇದ್ದಾಳೆ. ದೈವ ಕೋಲದಲ್ಲಿಯೂ ಸಹ ಅಬ್ಬಕ್ಕ ಬರುತ್ತಾಳೆ. ಹೆಣ್ಣಿನ ಅಗಾಧ ಶಕ್ತಿ ಪ್ರೌಢಿಮೆ ತಿಳಿಯೋದು ಇಂತಹವರ ಉದಾಹರಣೆಯಿಂದಲೇ. ಈಗ ಚೆನ್ನೆöÊನಲ್ಲಿರುವ ಐಸಿಜಿಎಸ್ ಅಬ್ಬಕ್ಕ ನಮ್ಮ ನೌಕಾಪಡೆ ಗಸ್ತುದಳದ ಹೊಸ ನೌಕೆ. ನಮ್ಮ ಕರಾವಳಿಯನ್ನ ಪರಂಗಿಯವರಿಗೆ ಬಿಟ್ಟು ಕೊಡದೆ ಧೀರೆಯಾಗಿ ವೀರೆಯಾಗಿ ಹೋರಾಡಿದ್ದು ನಮ್ಮ ಅಬ್ಬಕ್ಕ. ಇವಳಿಗೆ ಭಯವೆನ್ನುವುದೇ ಗೊತ್ತಿರಲ್ಲಿಲ್ಲ. ಇವಳನ್ನ ಅಭಯ ದೇವಿಯೆಂದೂ ಕರೆಯುತ್ತಿದ್ದರು.
    ಹೆಣ್ಣು ಶಕ್ತಿ ದೇವತೆ. ಆಕೆಯಲ್ಲಿ ಪ್ರತಿಯೊಂದೂ ಇದೆ ಎನ್ನುವುದು ನಮ್ಮಲ್ಲಿರುವ ನಂಬಿಕೆ. ಆಕೆ ಶಾಂತ ಸ್ವರೂಪ ಕ್ಷಮಯಾ ಧರಿತ್ರಿ ಎಂಬುವ ಗುಣಲಕ್ಷಣಗಳನ್ನ ಅವಳ ಮುಡಿಗೆ ಇರಿಸಿದ್ದೇವೆ. ಅದು ಆಕೆ ಈಗಿನವರೆಗೂ ಪಾಲಿಸಿಕೊಂಡು ಬಂದ ನಿಯಮ. ಆದರೆ ಆಕೆ ಒಮ್ಮೆ ರೊಚ್ಚಿಗೆದ್ದರೆ ಅವಳ ಮುಂದೆ ನಿಲ್ಲುವ ತಾಕತ್ತು ನಮಗಿರುವುದಿಲ್ಲ. ಅವಳ ರೌದ್ರಾವತಾರಕ್ಕೆ ಒಂದು ಸೀಮೆಯಿಲ್ಲ. ರಾಣಿ ಅಬ್ಬಕ್ಕ ಒಂದು ಶಕ್ತಿ ದೇವತೆಯಾಗಿದ್ದಳೆಂದರೆ ಅತಿಶಯೋಕ್ತಿಯಲ್ಲ. ಆಗಿನಕಾಲದ ಪೋರ್ಚುಗೀಸರ ಬಲಿಷ್ಠ ನೌಕಾಪಡೆಯನ್ನ ಧೂಳಿಪಟಮಾಡಿದ್ದ ಆಕೆ. ತನ್ನ ರಾಜ್ಯ, ದೇಶಕ್ಕಾಗಿ ಅವಳ ಗಂಡ, ಮನೆಯವರು ಮಾಡಿದ ಅವಮಾನಗಳನ್ನ ಬಿಟ್ಟು ಬಂದು ತನ್ನ ಜನ್ಮಸಿದ್ಧವಾಗಿ ಬಂದದನ್ನ ಸಾಧಿಸಿ ತನ್ನ ಜೀವನವನ್ನು ದೇಶಕ್ಕಾಗಿ ಮುಡಿವಾಗಿಟ್ಟಿದ್ದು ಒಂದು ದಂತಕಥೆಯೇ ಸರಿ.

    Visit this link for an article About “Rani Abbakka Chowta” in English

    error: Jain Heritage Centres - Celebrating Jain Heritage.....Globally!