Skip to content
Home » ಕನ್ನಡ » ಸುದ್ದಿ-ಸಮಾಚಾರ » ಶ್ರೀಕ್ಷೇತ್ರ ಹೊಂಬುಜದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ 33ನೇ ವಾರ್ಷಿಕ ಸಮ್ಮೇಳನ

ಶ್ರೀಕ್ಷೇತ್ರ ಹೊಂಬುಜದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ 33ನೇ ವಾರ್ಷಿಕ ಸಮ್ಮೇಳನ

    ಹೊಂಬುಜ, 5 ಅಕ್ಟೋಬರ್ 2019: ಶ್ರೀಕ್ಷೇತ್ರ ಹೊಂಬುಜದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ 33ನೇ ರಾಜ್ಯ ಸಮ್ಮೇಳನವು ಅಕ್ಟೋಬರ್ 18 ರಿಂದ 20ರ ವರೆಗೆ ನಡೆಯಲಿದೆ. ಹೊಂಬುಜ ಜೈನಮಠದ ಆಶ್ರಯದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ರಾಜ್ಯಾದ್ಯಂತದಿಂದ ಸುಮಾರು 300-350 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಪ್ರತಿನಿಧಿಗಳು ಕರ್ನಾಟಕದ ಇತಿಹಾಸ, ಸಂಸ್ಕೃತಿ ಹಾಗೂ ಶಾಸನಗಳಿಗೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

    ಕಳೆದ ರಾಜ್ಯ ಸಮ್ಮೇಳನದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಕಲನ ”ಇತಿಹಾಸ ದರ್ಶನ” ಸಂಪುಟ 34ರ ಬಿಡುಗಡೆ ಈ ಸಂದರ್ಭದಲ್ಲಿ ನಡೆಯಲಿದೆ.

    ಸಮ್ಮೇಳನಾಧ್ಯಕ್ಷರಾಗಿ ಹಿರಿಯ ವಿದ್ವಾಂಸರಾದ ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು ಆಯ್ಕೆಯಾಗಿದ್ದಾರೆ.

    ರಾಜ್ಯ ಪ್ರಶಸ್ತಿಗಳು: ಅಲ್ಲದೆ ಇತಿಹಾಸ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ರಾಜ್ಯ ಪ್ರಶಸ್ತಿಗಳನ್ನು ಸಮ್ಮೇಳನದಲ್ಲಿ ಪ್ರಧಾನ ಮಾಡಲಾಗುವುದು.

    • ಇತಿಹಾಸ ಸಂಸ್ಕೃತಿ ಶ್ರ‍ೀ ಪ್ರಶಸ್ತಿ – ಡಾ.ವಸುಂಧರಾ ಫಿಲಿಯೋಜಾ
    • ಡಾ.ಬಾ.ರಾ.ಗೋಪಾಲ್ ಪ್ರಶಸ್ತಿ – ಡಾ.ಜೆ.ಎಂ.ನಾಗಯ್ಯ
    • ಸಂಶೋಧನ ಶ್ರ‍ೀ ಪ್ರಶಸ್ತಿ – ಡಾ.ಶೀಲಕಾಂತ ಪತ್ತಾರ
    • ನಾಯಕ ಶ್ರ‍ೀ ಪ್ರಶಸ್ತಿ – ಡಾ.ವಿರೂಪಾಕ್ಷಿ ಪೂಜಾರಹಳ್ಳಿ
    • ನೊಳಂಬ ಶ್ರ‍ೀ ಪ್ರಶಸ್ತಿ – ಡಾ.ಡಿ.ವಿ.ಪರಮಶಿವಮೂರ್ತಿ
    • ಸುಮಂಗಲ ಪಾಟೀಲ ಪ್ರಶಸ್ತಿ – ಡಾ.ಬಿ.ಜಿ.ಸಿದ್ಧಲಿಂಗಮ್ಮ
    • ಡಾ.ಶ್ರ‍ೀನಿವಾಸ ಹಾವನೂರ‍ ಪ್ರಶಸ್ತಿ – ಡಾ.ಕೆ.ವಸಂತಲಕ್ಷ್ಮಿ
    • ಸೂರ್ಯಕೀರ್ತಿ ಪ್ರಶಸ್ತಿ – ಶ್ರ‍ೀ ಎಂ.ಬಿ.ಪಾಟೀಲ
    • ಡಾ.ಎಂ.ಎಚ್.ಕೃಷ್ಣ ಮೆರಿಟ್ ಅವಾರ್ಡ್ – ಡಾ.ಮೋಹನ್ ಆರ್.

    – ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ



    error: Jain Heritage Centres - Celebrating Jain Heritage.....Globally!